ಕನ್ನಡ ಕಿರುತೆರೆಯಲ್ಲಿ ಮನರಂಜನೆಗೆ ಮುನ್ನುಡಿ ಬರೆದ ಸ್ಟಾರ್ ಸುವರ್ಣ ವಾಹಿನಿಯು ನವರಾತ್ರಿಯ ಪ್ರಯುಕ್ತ “ಸುವರ್ಣ ದಸರಾ ದರ್ಬಾರ್” ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ದಸರಾದ ಈ ಸುಸಂದರ್ಭದಲ್ಲಿ ಮನೆ ಮನೆಯಲ್ಲೂ ಹಬ್ಬದ ವಾತಾವರಣ ಸೃಷ್ಟಿಸುವುದಕ್ಕಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನಾಡಹಬ್ಬದ ಪ್ರಯುಕ್ತ ದಸರಾ ದರ್ಬಾರ್ ವೇದಿಕೆಯಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಪುರಸ್ಕಾರಗಳನ್ನು ಮಾಡಲಾಯಿತು. ‘ನೀನಾದೆನಾ’ ಧಾರವಾಹಿ ನಟಿ ವೇದಾ ನೃತ್ಯದ ರೂಪದಲ್ಲಿ ‘ಮಹಿಷಾಸುರ ಸಂಹಾರ’ದ ಕತೆಯನ್ನು ತೋರಿಸಿಕೊಟ್ಟಿದ್ದಾರೆ. ಜೊತೆಗೆ ಈ ಕಾರ್ಯಕ್ರಮಕ್ಕೆ ಹಾಸ್ಯ ನಟರಾದ ರಂಗಾಯಣ ರಘು ಅವರು ಮುಖ್ಯ ಅಥಿತಿಯಾಗಿ ಆಗಮಿಸಿದ್ದು ಚಿತ್ರರಂಗದಲ್ಲಿ ಯಶಸ್ವಿ 30 ವರ್ಷಗಳನ್ನು ಪೂರೈಸಿದ ಸಂಭ್ರಮವನ್ನು ಈ ವೇದಿಕೆಯಲ್ಲಿ ಸಂಭ್ರಮಿಸಲಾಯಿತು. ಮತ್ತೊಂದು ಪ್ರಮುಖ ವಿಶೇಷತೆ ಅಂದ್ರೆ ಸುವರ್ಣ ಪರಿವಾರದ 16 ಸ್ಟಾರ್ ನಾಯಕಿಯರು ಭಾಗವಹಿಸಿದ್ದು. ‘ನಮ್ಮ ಲಚ್ಚಿ’ ಧಾರವಾಹಿ ಖ್ಯಾತಿಯ ಸಂಗಮ್ ಹಾಗು ನಟ ಅರುಣ್ ಹರಿಹರನ್ ಕಾರ್ಯಕ್ರಮದ ನಿರೂಪಣೆಯ ಜವಬ್ದಾರಿಯನ್ನು ನಿಭಾಯಿಸಿದ್ದಾರೆ. ಇನ್ನು ನಟಿ,ನಿರೂಪಕಿ ಅನುಪಮಾಳ ‘ದ್ರೌಪದಿ ವಸ್ತ್ರಾಪಹರಣ’ದ ಅದ್ಬುತ ಸ್ಕಿಟ್ ವೀಕ್ಷಕರ ಮನಗೆಲ್ಲುವುದಂತು ಖಚಿತ. ಭರ್ಜರಿ ಡಾನ್ಸ್, ಹಾಡು ಹರಟೆ, ಆಟ ತುಂಟಾಟಗಳಿಂದ ವೀಕ್ಷಕರಿಗೆ ಮನರಂಜನೆಯ ಹೂರಣವನ್ನು ನೀಡಲಿದೆ ಸ್ಟಾರ್ ಸುವರ್ಣ.
ಜಬರ್ದಸ್ತ್ ಮೋಜು ಮಸ್ತಿಯನ್ನು ಹೊತ್ತು ತರ್ತಿದೆ “ಸುವರ್ಣ ದಸರಾ ದರ್ಬಾರ್” ಇದೇ ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೆ ವೀಕ್ಷಿಸಿ.