ಉದಯ ಟಿವಿ

ಸುಂದರಿ – ಜನೇವರಿ ೧೧ರಿಂದ ಸೋಮವಾರದಿಂದ ಶನಿವಾರ ರಾತ್ರಿ ೮ಕ್ಕೆ

ಜಾಹೀರಾತುಗಳು

ರಮೇಶ್‌ ಅರವಿಂದ್‌ ನೇತೃತ್ವದ ಹೊಸ ಧಾರಾವಾಹಿ – ಸುಂದರಿ

Sundari Serial Udaya TV
Sundari Serial Udaya TV

ಉದಯ ಟಿವಿ ಇಪ್ಪತ್ತೇಳನೇ ವಸಂತಕ್ಕೆ ಕಾಲಿಟ್ಟಿದ್ದು ದಿನದಿಂದ ದಿನಕ್ಕೆ ಹೊಸ ಕಥೆಗಳಿಂದ ಜನರ ಮನಸ್ಸನ್ನು ಗೆಲ್ಲೋ ಪ್ರಯತ್ನದಲ್ಲಿದೆ. ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ತನ್ನ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ಕಸ್ತೂರಿ ನಿವಾಸ, ಸೇವಂತಿ, ಯಾರಿವಳು, ಆಕೃತಿ, ಹಾಗು ಮನಸಾರೆಯಂತಹ ಕೌಟುಂಬಿಕ ಧಾರಾವಾಹಿಗಳ ಜೊತೆಗೆ ಈಗ ಉದಯ ಟಿವಿ, ಹೊರಗೆ ಕಾಣುವ ದೇಹದ ಬಣ್ಣಕ್ಕಿಂತ ಮನಸ್ಸಿನ ಬಣ್ಣ ಮುಖ್ಯ ಎಂದು ಸಾರುವ “ಸುಂದರಿ” ಎಂಬ ಧಾರಾವಾಹಿಯನ್ನು ಹೊತ್ತು ತರುತ್ತಿದೆ.

ಕಥೆ

ದಶಕದ ನಂತರ ಮತ್ತೆ ನಿಮ್ಮ ಮುಂದೆ ಬರ್ತಿರೋ ಈ ಸುಂದರಿ ಧಾರಾವಾಹಿಯು ಒಂದು ಪರಿಪೂರ್ಣ ಮನರಂಜನೆಯೆ ಜೊತೆಗೆ ಪರಿಶುದ್ಧ ಪ್ರೀತಿಯ ಸವಿಯನ್ನು ನಿಮ್ಮ ಮುಂದಿಡಲಿದೆ. ಹೊಸ ಕಲ್ಪನೆಯ ಜಗತ್ತಿನಲ್ಲಿ ಇಂದಿಗೂ ವರ್ಣಭೇದದ ವಿರುದ್ಧ ನಿಂತು ತನ್ನ ಕನಸಿನ ಹಾದಿಯನ್ನು ಹಿಂಬಾಲಿಸುವ ಕಥೆಯಾಗಿದ್ದು ನಾಯಕಿ ಸುಂದರಿ ಎಂಬ ಹುಡುಗಿಯ ಕರಾಳ ಕಾಲ್ಪನಿಕ ಕಥೆಯೇ ಸುಂದರಿ ಧಾರಾವಾಹಿ. ಅಮ್ಮ, ಸುಂದರಿಯ ಮದುವೆ ಮಾಡುವ ಕನಸಿನ ನಡುವೆ ಐಎಎಸ್‌ ಅಧಿಕಾರಿಯಾಗಬೇಕೆನ್ನುವುದು ಇವಳ ಜೀವನದ ಮಹದಾಸೆ.

ತನ್ನ ಜೀವನದ ಎಲ್ಲಾ ಏರಿಳಿತಗಳೊಂದಿಗೆ ತನ್ನ ಗುರಿಯನ್ನು ಸಾಧಿಸುವತ್ತ ಅವಳ ಪ್ರಯಾಣವು ಸಾಗುತ್ತದೆ. ಹೊಸ ಹುರುಪಿನೊಂದಿಗೆ ʼಸ್ಲಿಂಗ್ ಶಾಟ್ʼ ನಿರ್ಮಾಣ ಸಂಸ್ಥೆಯಡಿ ರಮೇಶ್ ಅರವಿಂದ್ ನೇತೃತ್ವದಲ್ಲಿಈ ಧಾರಾವಾಹಿ ಮೂಡಿಬರುತ್ತಿದೆ. ಅನುಭವಿ ನಿರ್ದೇಶಕ ಗಣೇಶ್ ಶಾಸ್ತ್ರೀ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಈ ಹಿಂದೆ ಜನಪ್ರಿಯ ಧಾರಾವಾಹಿಗಳಲ್ಲಿ ಕೆಲಸ ಮಾಡಿದ ನಿಪುಣ ಛಾಯಾಗ್ರಾಹಕ ಮನೋಹರ್ ಜೋಶಿ ಈ ತಂಡದಲ್ಲಿದ್ದಾರೆ. ಇನ್ನಷ್ಟು ನುರಿತ ತಂತ್ರಜ್ಞರನ್ನು ಒಳಗೊಂಡಿರುವ ಸುಂದರಿ ತಂಡವು ಜಬರ್ದಸ್ತ್‌ ಮನರಂಜನೆ ನೀಡುವ ಭರವಸೆಯಲ್ಲಿದೆ.

ಜಾಹೀರಾತುಗಳು

ನಟರು

ನಾಯಕಿ ಸುಂದರಿ ಪಾತ್ರವನ್ನು ಹೆಸರಾಂತ ಪ್ರತಿಭೆ ಐಶ್ವರ್ಯಾ, ಕಥಾನಾಯಕ ಪಾತ್ರವನ್ನು ಸಮೀಪ್ ನಿರ್ವಹಿಸುತ್ತಿದ್ದಾರೆ. ಅಲ್ಲದೇ ನಂದಿನಿ ಧಾರಾವಾಹಿಯಲ್ಲಿ ಹೆಸರುವಾಸಿಯಾದ ನಟಿ ಕಾವ್ಯಾಶಾಸ್ತ್ರಿ,,ಹೆಸರಾಂತ ನಟ ಶ್ರೀಕಾಂತ ಹೆಬ್ಳೇಕರ್‌ ಸುಂದರಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಂದರಿ ಇದೇ ಜನೇವರಿ ೧೧ರಿಂದ ರಾತ್ರಿ ೮ಕ್ಕೆ ಪ್ರತಿದಿನ ಸೋಮವಾರದಿಂದ ಶನಿವಾರ ಉದಯ ಟಿಯಲ್ಲಿ ಪ್ರಸಾರವಾಗಲಿದೆ.

Udaya TV

Recent Posts

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

6 hours ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

4 days ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

1 week ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

1 week ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

3 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

4 weeks ago