ಜೀ ಕನ್ನಡ ಚಾನೆಲ್

ಸತ್ಯ ಧಾರಾವಾಹಿ 100ರ ಕಂತಿನ ಮೈಲಿಗಲ್ಲು – ಜೀ ಕನ್ನಡದಲ್ಲಿ

ಜಾಹೀರಾತುಗಳು
Satya Serial 100 Episodes at Zee Kannada
Satya Serial 100 Episodes at Zee Kannada

ಜೀ ಕನ್ನಡದಲ್ಲಿ ಪ್ರಾರಂಭದಿಂದಲೇ ಅಪಾರ ನಿರೀಕ್ಷೆ ಹುಟ್ಟಿಸಿದ, ಹೆಣ್ಣುಮಕ್ಕಳು ಅಡುಗೆಮನೆಗೆ ಸೀಮಿತವಾಗಿಲ್ಲ, ಅವರು ಸಮಾಜದಲ್ಲಿ ಧೈರ್ಯವಾಗಿ ತಮಗೆ ಬೇಕಾದ ಏನನ್ನಾದರೂ ಸಾಧಿಸಬಹುದು ಎನ್ನುವುದನ್ನು ಎತ್ತಿ ತೋರಿಸಿದ ಪಾತ್ರ “ಸತ್ಯ” ಧಾರಾವಾಹಿಯ ಪಾತ್ರ. ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಮಾರ್ಗದರ್ಶಿಯಾದ ಪಾತ್ರ ಇದು. ಈಗ ಯಶಸ್ವಿಯಾಗಿ ನೂರು ಕಂತುಗಳನ್ನು ಪೂರೈಸಿದೆ. ಜನರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಪಾತ್ರ ಇದಾಗಿದೆ.

ಸತ್ಯ ಧಾರಾವಾಹಿಯ ಎಲ್ಲ ಪಾತ್ರಗಳೂ ವೀಕ್ಷಕರ ಮೆಚ್ಚುಗೆ ಪಡೆದಿದೆ. ಸಿನಿಮಾ ರೀತಿಯಲ್ಲಿ ಪ್ರೋಮೋಗಳನ್ನು ಬಿಡುಗಡೆ ಮಾಡಿದ ಸತ್ಯ ಧಾರಾವಾಹಿ ಸಿನಿಮಾದಂತೆಯೇ ಒಂದು ಕಲ್ಟ್ ಸೃಷ್ಟಿಸಿದೆ. ರಾತ್ರಿ 9 ಗಂಟೆಗೆ ಗಂಡಸರು ಸುದ್ದಿ ನೋಡಲು ಬಯಸುತ್ತಾರೆ. ಆದರೆ ಅದನ್ನು ಮೀರಿ ಎಲ್ಲರೂ “ಸತ್ಯ”ಧಾರಾವಾಹಿ ವೀಕ್ಷಿಸುತ್ತಿದ್ದಾರೆ. ಬರೀ ಮಹಿಳಾ ವೀಕ್ಷಕರೇ ಅಲ್ಲದೆ ಪುರುಷರೂ ಇಷ್ಟಪಟ್ಟು ನೋಡುತ್ತಿರುವ ಧಾರಾವಾಹಿ “ಸತ್ಯ”. ಜೀ ಕನ್ನಡದ ಬ್ರಾಂಡ್ ಧ್ಯೇಯ “ಬಯಸಿದ ಬಾಗಿಲು ತೆಗೆಯೋಣ”ದಂತೆ ಈ ಧಾರಾವಾಹಿ ಮಹಿಳಾ ಸಬಲೀಕರಣದ ಬಾಗಿಲುಗಳನ್ನು ತೆರೆದಿದೆ. ಸತ್ಯಳ ಟಾಮ್ ಬಾಯ್ ಪಾತ್ರ, ಆಕೆಯ ದಿಟ್ಟತನ ಎಲ್ಲರನ್ನೂ ಗೆದ್ದಿದೆ.

ಜಾಹೀರಾತುಗಳು

ಈ ಧಾರಾವಾಹಿಯ ಯಶಸ್ವಿ ನೂರನೇ ಕಂತಿನ ಕುರಿತು ಜೀ ಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, “ಜೀ ಕನ್ನಡದ ಎಲ್ಲ ಫಿಕ್ಷನ್ ಹಾಗೂ ನಾನ್-ಫಿಕ್ಷನ್ ಕಾರ್ಯಕ್ರಮಗಳನ್ನು ವೀಕ್ಷಕರು ಬಹಳ ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇದೀಗ ಮಹಿಳೆಯರಿಗೆ ಪ್ರೇರಕಶಕ್ತಿಯಾಗಿರುವ “ಸತ್ಯ” ಧಾರಾವಾಹಿ ನೂರು ಕಂತಿನ ಮೈಲಿಗಲ್ಲು ಮುಟ್ಟಿರುವುದು ಅವರ ಅಭೂತಪೂರ್ವ ಪ್ರೀತಿಗೆ ದ್ಯೋತಕವಾಗಿದೆ. ಜೀ ಕನ್ನಡ ವೀಕ್ಷಕರನ್ನು ರಂಜಿಸುವ ಮತ್ತಷ್ಟು ವಿನೂತನ ಕಾರ್ಯಕ್ರಮಗಳನ್ನು ನಾವು ನೀಡಲು ಇದು ಪ್ರೇರಣೆ ನೀಡಿದೆ” ಎಂದರು.

ಈ ಧಾರಾವಾಹಿಯನ್ನು ಪ್ರಖ್ಯಾತ ನಿರ್ಮಾಣ ಸಂಸ್ಥೆ ಆರ್.ಆರ್.ಆರ್. ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ನಿರ್ದೇಶನ ಸ್ವಪ್ನಾ ಕೃಷ್ಣ ಅವರದು. ಗೌತಮಿ ಜಾದವ್, ಸಾಗರ್, ಹಿರಿಯ ನಟ ಶ್ರೀನಿವಾಸಮೂರ್ತಿ, ಅಭಿಜಿತ್ , ತ್ರಿವೇಣಿ ನಟಿಸಿದ್ದಾರೆ.

Recent Posts

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

11 hours ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

4 days ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

1 week ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

1 week ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

3 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

4 weeks ago