ಜೀ ಕನ್ನಡ ಚಾನೆಲ್

೧ ಗಂಟೆಯ ಮಹಾಸಂಚಿಕೆಗಳು ಮಹಾಸಂಚಿಕೆ ಮಹಾಮನೋರಂಜನೆ

ಜಾಹೀರಾತುಗಳು

ಕರ್ನಾಟಕದ ಜನರನ್ನ ಮನೋರಂಜಿಸುವಲ್ಲಿ ಸದಾ ಮುಂಚೂಣಿಯಲ್ಲಿರವ ಜೀ ಕನ್ನಡ ವಾಹಿನಿ,ಪ್ರತಿ ಬಾರಿಯು ಹೊಸತನಕ್ಕೆ ಹಾತೊರೆಯುತ,ಹೊಸತೇನನ್ನೋ ಜನರಿಗೆ ತಲುಪಿಸುವಲ್ಲಿ ಸದಾ ಕಾರ್ಯಪ್ರವೃತ್ತವಾಗಿರುತ್ತದೆ.

Zee Kannada Sri Krishna Janmashtami
Zee Kannada Sri Krishna Janmashtami

ಸಂಜೆ ೫.೩೦ ಆಯ್ತು ಎಂದರೆ ಮನೆಗಳಲ್ಲಿ ಒಂದು ತರಹದ ಸಂಭ್ರಮ ಮನೆಮಂದಿಯೆಲ್ಲ ತಮ್ಮ ಕೆಲಸ ಮುಗಿಸಿ ಟಿವಿ ಮುಂದೆ ಹಾಜರಾಗಿಬಿಡುತ್ತಾರೆ. ಯಾಕಂದ್ರೆ ಝೀ ಕನ್ನಡ ತನ್ನ ಮನೋರಂಜನೆಯ ಕೆಲಸವನ್ನ ಶುರುಮಾಡುವ ಸಮಯವದು.ಇಂತಹ ಝೀ ಕನ್ನಡ ಈ ಬಾರಿ ತನ್ನ ಪ್ರಿಯ ವೀಕ್ಷಕರಿಗಾಗಿ ಅವರ ಮನೆಮನ ಮೆಚ್ಚಿದ ೫ ಧಾರಾವಾಹಿಗಳ ಮಹಾಸಂಚಿಕಯನ್ನ ಪ್ರಸಾರಮಾಡಲು ನಿರ್ಧರಿಸಿದೆ, ಈ ಪ್ರಯತ್ನವು ಇದೇ ಸೋಮವಾರದಿಂದ ಶುರುವಾಗಿದ್ದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಾಡಲಾಗುತ್ತಿರುವ ಈ ಹೊಸ ಪ್ರಯತ್ನ ಈ ವಾರವೆಲ್ಲ ಜನರನ್ನ ಮನೋರಂಜಿಸೋದಂತು ಗ್ಯಾರಂಟಿ.ಸೋಮವಾರ ಸಂಜೆ ೫.೩೦ರಿಂದ ೭.೩೦ರ ತನಕ ಒಂಟಿ ಮನಸ್ಸುಗಳ ಪ್ರೇಮಕಾವ್ಯ ಅಮೃತಧಾರೆ ಧಾರವಾಹಿಯನ್ನ ಪ್ರಸಾರ ಮಾಡುವ ಮುಖಾಂತರ ಈ ಪ್ರಕ್ರಿಯೆ ಚಾಲನೆಗೊಂಡಿದ್ದು ಪುಟ್ಟಕ್ಕನಮಕ್ಕಳು ಮಂಗಳವಾರ ರಾತ್ರಿ ೭.೩೦ರಿಂದ ೮.೩೦ರ ತನಕ ಪ್ರಸಾರವಾಗಲಿದೆ ಇದೇ ಸರಣಿಯಲ್ಲಿ ಬರುವ ಶ್ರೀರಸ್ತು ಶುಭಮಸ್ತು ಬುಧವಾರ ರಾತ್ರಿ ೮.೩೦ ರಿಂದ ೯.೩೦ರ ತನಕ ಪ್ರಸಾರವಾದರೆ,ಸೀತಾರಾಮ ಗುರುವಾರ ರಾತ್ರಿ ೯.೩೦ರಿಂದ ೧೦.೩೦ತನಕ ಪ್ರಸಾರಗೊಳ್ಳಲ್ಲಿದ್ದು ,ಭೂಮಿಗೆ ಬಂದ ಭಗವಂತ ಶುಕ್ರವಾರ ರಾತ್ರಿ ೧೦ರಿಂದ ೧೧ಕ್ಕೆ ಪ್ರಸಾರವಾಗುವ ಮುಖಾಂತರ ಈ ವಿಶೇಷ ೧ಗಂಟೆಗಳ ಮಹಾಸಂಚಿಕೆ ಎಂಬ ಮಹಾಮನೋರಂಜನೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ, ಪ್ರತಿದಿನ ನಾಳೆ ಏನಾಗಬಹುದು ಎಂದು ಕಾಯುವ ವೀಕ್ಷಕರನ್ನ ಮನೋರಂಜಿಸುವ ಜೊತೆಗೆ ಅವರ ಕುತೂಹಲಕ್ಕೆ ತೆರೆಎಳೆಯುವ ಈ ಸಣ್ಣ ಪ್ರಯತ್ನ ಝೀ ಕನ್ನಡ ತನ್ನ ಅಭಿಮಾನಿಗಳಿಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಕೊಡುತ್ತಿರುವ ವಿಶೇಷ ಉಡುಗೊರೆ ಎನ್ನಬಹುದು.

ಜಾಹೀರಾತುಗಳು

Recent Posts

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

6 days ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

1 week ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

2 weeks ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

2 weeks ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

3 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

1 month ago