ಸ್ಟಾರ್ ಸುವರ್ಣ

ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ “ಅರಗಿಣಿ-2” | ಡಿಸೆಂಬರ್ 12ರಿಂದ ಮಧ್ಯಾಹ್ನ 2.30ಕ್ಕೆ |

ಜಾಹೀರಾತುಗಳು
Aragini 2 Serial Star Suvarna
Aragini 2 Serial Star Suvarna

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಪ್ರೇಕ್ಷಕರಿಗೆ ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದುಮಣಿಗಳು, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮರಳಿಮನಸಾಗಿದೆ, ಮನಸೆಲ್ಲಾನೀನೇ, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ “ಅರಗಿಣಿ-2” ಎಂಬ ಶೀರ್ಷಿಕೆಯಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗುತ್ತಿದೆ.

ಇದು ಕೋಪ, ದ್ವೇಷದಿಂದ ಶುರುವಾಗಿ ಪ್ರೀತಿಯ ಮಳೆ ಸುರಿಸೋ ಮನ ಮುಟ್ಟುವ ಪ್ರೇಮಕತೆಯೇ “ಅರಗಿಣಿ-2”.ತಂದೆ ತಾಯಿ ಇಲ್ಲದ ಆಗರ್ಭ ಶ್ರೀಮಂತ ವಿಕ್ರಮಾಧಿತ್ಯ, ಅಕ್ಕ ಅಂದ್ರೆ ಈತನಿಗೆ ಪಂಚಪ್ರಾಣ, ಅಕ್ಕನಿಗಾಗಿ ಏನನ್ನು ಬೇಕಿದ್ರೂ ತ್ಯಾಗ ಮಾಡಲು ಸಿದ್ಧನಿರುವ ಮುದ್ದಿನ ತಮ್ಮ. ಯಾವಾಗಲು ಸಿಡುಕುಮೂತಿ ಹಾಕೊಳ್ಳೋ ಈತ ಕೆಲಸದಲ್ಲಿ ಪಕ್ಕ ಪರ್ಫೆಕ್ಟ್. ಚಿಕ್ಕಂದಿನಲ್ಲಿ ನಡೆದ ಕೆಲವು ಘಟನೆಗಳಿಗೆ ಪ್ರತ್ಯುತ್ತರ ನೀಡಲು ಹಠ ತೊಟ್ಟು, ಗುರಿ ಮುಟ್ಟಿದ ಛಲಗಾರ ಈ ಕಥಾನಾಯಕ ವಿಕ್ರಮಾಧಿತ್ಯ.

ಇನ್ನು ಕಥಾನಾಯಕಿ ಪದ್ಮಾವತಿ. ಬಡ ಕುಟುಂಬದಿಂದ ಬಂದಿರೋ ಈಕೆ ಶುದ್ಧ ತರ್ಲೆ, ಮುದ್ದಾಗಿ ತನ್ನ ಪೆದ್ದುತನದಿಂದ ಮನೆಮಂದಿಯನ್ನೆಲ್ಲ ನಗಿಸೋ ನಗುಮೊಗದ ಕಣ್ಮಣಿ. ಪದ್ಮಾವತಿಗೆ ಅಮ್ಮ-ಅಪ್ಪ ಹಾಗು ಅಕ್ಕ ಅಂದ್ರೆ ಪಂಚಪ್ರಾಣ. ಮನೆಯ ಜವಬ್ದಾರಿ ಹೊತ್ತುಕೊಂಡಿರೋ ಈಕೆ ಉದ್ಯೋಗಕ್ಕಾಗಿ ಪರಿತಪಿಸುತ್ತಿರುತ್ತಾಳೆ. ಎಷ್ಟೇ ಕಷ್ಟಗಳು ಎದುರಾದಾಗಲೂ ನಗು ಮುಖದಿಂದಲೇ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳೋ ಮುಗ್ದ ಹುಡುಗಿ ಪದ್ಮಾವತಿ.

ಜಾಹೀರಾತುಗಳು

ಆದರೆ ವಿಕ್ರಮಾದಿತ್ಯನಿಗೆ ಬಡ ಹುಡುಗಿ ಪದ್ಮಾವತಿ ಮೇಲೆ ಅಕಸ್ಮಾತ್ ಆಗಿ ಹುಟ್ಟಿಕೊಂಡ ದ್ವೇಷ, ಹಾಗೂ ಎರಡು ಸಂಸಾರದ ನಡುವೆ ಆಂತರಿಕ ಸಮಸ್ಯೆಗಳು. ಜೊತೆಗೆ ದ್ವೇಷದಲ್ಲಿ ಪ್ರೇಮ ಮೂಡುವ ಸನ್ನಿವೇಶಗಳ ಭಾವಾಶೇಷವೇ ಈ ಧಾರಾವಾಹಿಯ ಕಥಾಹಂದರ. ಹೊಚ್ಚ ಹೊಸ ಧಾರಾವಾಹಿ “ಅರಗಿಣಿ-2” ಇದೇ ಡಿಸೆಂಬರ್ 12ರಿಂದ ಮಧ್ಯಾಹ್ನ 2.30ಕ್ಕೆ ನಿಮ್ಮ ನೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

Recent Posts

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

4 days ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

5 days ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

2 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

3 weeks ago

ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯಲ್ಲಿ ‘ವರಲಕ್ಷ್ಮಿ ಕಲ್ಯಾಣ’ , ಮಹಾ ತಿರುವುಗಳುಳ್ಳ ಸಂಚಿಕೆಗಳು ಇದೇ ಸೋಮ-ಶನಿ ಸಂಜೆ 6.30 ಕ್ಕೆ.

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…

4 weeks ago

ಶ್ರೀ ಬ್ರಾಹ್ಮೀ ಹೊಸ ಕಥೆಯ ಶ್ರಾವಣಿ ಸುಬ್ರಮಣ್ಯ ಜೀ಼ ಕನ್ನಡದಲ್ಲಿ ಶುಭಾರಂಭ ಮಾರ್ಚ್‌ 18ರಿಂದ ಮಹಾಮನೋರಂಜನೆಗೆ ಮುನ್ನುಡಿ

ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್‌ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼…

1 month ago