ಜೀ ಕನ್ನಡ ಚಾನೆಲ್

ಹಿಟ್ಲರ್ ಕಲ್ಯಾಣ – ಜೀ ಕನ್ನಡ ಆಗಸ್ಟ್ 9 ರಂದು ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸರವಾಗಲಿದ್ದು ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ

ಜಾಹೀರಾತುಗಳು

ಸೊಸೆಯಂದಿರೇ ಮಾವನಿಗೆ ಅತ್ತೆ ಹುಡುಕುವ ಪರಿಕಲ್ಪನೆಯನ್ನು ಎಲ್ಲಾದರೂ ಕೇಳಿದ್ದೀರಾ? – ಹಿಟ್ಲರ್ ಕಲ್ಯಾಣ

Serial Hitler Kalyana Launching
Serial Hitler Kalyana Launching

ಇವನು ಪರ್ಫೆಕ್ಟು, ಅವಳು ಎಡವಟ್ಟು – ಜೀ ಕನ್ನಡ ಹೊಸದಾಗಿ ಪ್ರಾರಂಭಿಸುತ್ತಿರುವ ವಿನೂತನ ಧಾರಾವಾಹಿ “ಹಿಟ್ಲರ್ ಕಲ್ಯಾಣ”ದ ಸಾರಾಂಶ ಇದು. ಹೊಸತರದ ಪ್ರೇಮಕಥೆಗಳನ್ನು ಮೆಚ್ಚಿ ಪುರಸ್ಕರಿಸುತ್ತಿರುವ ಕನ್ನಡ ಕಿರುತೆರೆ ವೀಕ್ಷಕರಿಗೆ “ಹಿಟ್ಲರ್ ಕಲ್ಯಾಣ” ವಿನೂತನ ಅನುಭವ ನೀಡಲಿದೆ. ಇಲ್ಲಿಯವರೆಗೆ ಅತ್ತೆ ಸೊಸೆಯಂದಿರು ಹುಡುವುದು ಲೋಕಾರೂಢಿ . ಆದರೆ ಸೊಸೆಯಂದಿರೇ ಅತ್ತೆಯನ್ನು ಹುಡುಕುವ ವಿಶಿಷ್ಟ ಕಥೆಯನ್ನು ಇದು ಹೊಂದಿದೆ.

ಮಾವ ಎ.ಜೆ. ಅಲಿಯಾಸ್ ಅಭಿರಾಮ್ ಜೈಶಂಕರ್ ಕಿಂಚಿತ್ತೂ ಅಶಿಸ್ತನ್ನು ಸಹಿಸದ ಅತ್ಯಂತ ಕಠಿಣ ಶಿಸ್ತುಬದ್ಧ ವ್ಯಕ್ತಿ. ಹಿಟ್ಲರ್ ಎಂದೇ ಎಲ್ಲರಿಂದ ಕರೆಸಿಕೊಳ್ಳುತ್ತಾನೆ. ಇಂಥಾ ಮಾವನಿಗೆ ತಕ್ಕ ಜೋಡಿಯನ್ನು ತರಬೇಕೆನ್ನುವುದು ಸೊಸೆಯಂದಿರ ಆಶಯ.ಎ.ಜೆ. ಎಷ್ಟು ಪರ್ಫೆಕ್ಟೋ ಅಷ್ಟೇ ಎಡವಟ್ಟಿನ ಹುಡುಗಿ ಲೀಲಾ. ಅವಳು ಯಾವ ಕೆಲಸ ಮಾಡಿದರೂ ಅದಕ್ಕೆ ಹತ್ತಾರು ಸಮಸ್ಯೆಗಳನ್ನು ಸೃಷ್ಟಿಸುತ್ತಿರುತ್ತಾರೆ. ಅಂಥಾ ಪರ್ಫೆಕ್ಟ್ ವ್ಯಕ್ತಿಗೆ ಈ ಎಡವಟ್ಟಿನ ಹುಡುಗಿ ಜೋಡಿಯಾಗುತ್ತಾಳಾ ಎನ್ನುವುದು ಕುತೂಹಲ.

ಜಾಹೀರಾತುಗಳು

ಎ.ಜೆ.ಯ ಗಂಭೀರ ಸ್ವಭಾವಕ್ಕೆ ತದ್ವಿರುದ್ಧವಾದ ಲೀಲಾ ಬಹಳ ಸರಳ, ಚಟುವಟಿಕೆಯ ಉತ್ಸಾಹಿ ಹುಡುಗಿ. ಆಕೆ ತನ್ನ ಕಿರಿಯ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರೂ ತಂದೆಯ ಪ್ರೀತಿಯಲ್ಲಿ ಬೆಳೆದಿರುತ್ತಾಳೆ. ಆದರೆ ಆಕೆಯ ಮಲತಾಯಿಗೆ ಲೀಲಾ ಮೇಲೆ ಪ್ರೀತಿ ಇದ್ದರೂ ಎನೋ ಹೇಳಿಕೊಳ್ಳಲಾಗದ ಆತಂಕವಿದೆ. ಎ.ಜೆ.ಯನ್ನು ಮದುವೆಯಾಗಿ ಸೊಸೆಯಂದಿರು ಮತ್ತು ಮನೆಯನ್ನು ನಿಭಾಯಿಸುತ್ತಾಳಾ ಲೀಲಾ ಎಂಬ ಎಡವಟ್ಟು ಅನಿಶ್ಚಿತತೆಗಳಿಗೆ ತನ್ನನ್ನು ತಾನು ಒಗ್ಗಿಸಿಕೊಂಡು `ಪರಿಪೂರ್ಣ’ತೆಯ ಪರಿಕಲ್ಪನೆಯನ್ನೇ ಪ್ರಶ್ನಿಸುತ್ತಾಳಾ ಎನ್ನುವುದು ಹಿಟ್ಲರ್ ಕಲ್ಯಾಣ್ ಧಾರಾವಾಹಿಯ ಬೆಚ್ಚನೆಯ ಪ್ರೇಮಕಥೆಯಾಗಿದೆ.

Zee Kannada Serial Hitler Kalyana Launch Info

Recent Posts

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

17 hours ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

5 days ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

1 week ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

1 week ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

3 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

4 weeks ago