ಸ್ಟಾರ್ ಸುವರ್ಣ

ಮರಳಿ ಮನಸಾಗಿದೆ ಧಾರಾವಾಹಿಯಲ್ಲಿ ಶಮಂತ್ ಆಗಮನ

ಜಾಹೀರಾತುಗಳು
Marali Manasagide
Marali Manasagide

ವಿಕ್ರಾಂತ್ ಸ್ಪಂದನಾಳನ್ನು ವಿಹಾರಕ್ಕೆ ಕರೆದುಕೊಂಡು ಹೋಗಿ ಅವಳ ಮೇಲಿರುವ ಪ್ರೀತಿಯನ್ನು ನಿವೇದಿಸಿಕೊಳ್ಳಲು ನಿರ್ಧರಿಸುತ್ತಾನೆ. ಸ್ಪಂದನಾಳನ್ನು ಮನವೊಲಿಸಿ, ಇದು ತೀರ್ಥಹಳ್ಳಿಯಲ್ಲಿ ನಡೆಯುವ ಅಧಿಕೃತ ಕಾರ್ಯಕ್ರಮ ಕಡ್ಡಾಯವಾಗಿ ಹಾಜರಾಗಬೇಕು ಎಂದು ಹೇಳಿ ವಿಕ್ರಾಂತ್ ಅವಳನ್ನು ಯಾಮಾರಿಸಿ ಕರೆದುಕೊಂಡು ಹೋಗುತ್ತಾನೆ. ನಂತರ ವಿಕ್ರಾಂತ್ ಹೇಳಿರೋದೆಲ್ಲಾ ಸುಳ್ಳು ಎಂದು ಅರಿವಾಗಿ ಕೋಪಗೊಂಡ ಸ್ಪಂದನ ಹೊಗಬೇಕಾಗಿದ್ದ ದಾರಿಯನ್ನು ಮರೆತು ಅಕ್ರಮ ಚಟುವಟಿಕೆಯ ಕೇಂದ್ರವಾಗಿರುವ ಅಪರಿಚಿತ ಸ್ಥಳಕ್ಕೆ ಬಂದು ತಲುಪುತ್ತಾಳೆ. ಅಲ್ಲಿ ಸ್ಪಂದನಾಳನ್ನು ಗೂಂಡಾಗಳು ಬೆನ್ನಟ್ಟುತ್ತಾರೆ ಆದರೆ ಒಬ್ಬ ವ್ಯಕ್ತಿ ಆಕೆಯನ್ನು ರಕ್ಷಿಸುತ್ತಾನೆ. ತದನಂತರ ಆ ವ್ಯಕ್ತಿ ಬೇರೆ ಯಾರೂ ಅಲ್ಲ ಶಮಂತ್ ಇರಬಹುದು ಎಂಬ ಅನುಮಾನ ಸ್ಪಂದನಾಳಿಗೆ ಕಾಡುತ್ತದೆ.

ಅನುಮಾನ ಬಗೆಹರಿಸಲು ಸ್ಪಂದನಾ ಅವ್ಯಕ್ತಿಯನ್ನು ಶಮಂತ್ ಎಂದು ಕರೆಯುತ್ತಾಳೆ. ಆದರೆ ಶಮಂತ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಅದಲ್ಲದೆ ಆತನೇ ಆಕೆಯನ್ನು ಅಪಹರಿಸಿ ಒಂದು ಕೋಣೆಯಲ್ಲಿ ಕೂಡಿಹಾಕುತ್ತಾನೆ. ಅಚಾನಕ್ ಆಗಿ ಶಮಂತ್ ಬಾಯಿ ತಪ್ಪಿ ಸ್ಪಂದನಾ ಹೆಸರನ್ನು ಉಚ್ಚರಿಸುತ್ತಾನೆ ಆಗ ಸ್ಪಂದನಾಳಿಗೆ ಶಮಂತ್ ಗೊತ್ತಿದ್ದು ಗೊತ್ತಿಲ್ಲದಂತೆ ನಟಿಸುತ್ತಿರುವುದು ಎಂದು ತಿಳಿಯುತ್ತದೆ. ಸ್ಪಂದನಾಳನ್ನು ಹುಡುಕುತ್ತಾ ವಿಕ್ರಾಂತ್ ಅವರಿದ್ದ ಕೋಣೆಗೆ ದಾಳಿ ಮಾಡುತ್ತಾನೆ ಜೊತೆಗೆ ತಾನೇ ದಾಳಿಗೊಳಗಾದವನಂತೆ ನಟಿಸುತ್ತಾನೆ ಆಗ ಶಮಂತ್ ವಿಕ್ರಾಂತ್ ನನ್ನು ರಕ್ಷಿಸಲು ಮುಂದಾಗುತ್ತಾನೆ. ನಂತರ ಶಮಂತ್ ಒಂದು ರಹಸ್ಯ ಕಾರ್ಯಾಚರಣೆಯಲ್ಲಿದ್ದರು ಎಂದು ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಡುತ್ತಾನೆ. ಶಮಂತ್ ನನ್ನು ನಾಯಕ್ ಮನೆಗೆ ಮರಳಿ ಬರುವಂತೆ ವಿಕ್ರಂತ್ ಮತ್ತು ಸ್ಪಂದನ ಮನವೊಲಿಸಲು ಯತ್ನಿಸುತ್ತಾರೆ. ಮುಂದೆ ಶಮಂತ್ ಮರಳಿ ಬಂದಾಗ ಶಮಂತ್ ನನ್ನು ನೋಡಿ ವೈಷ್ಣವಿ ಆಶ್ಚರ್ಯ ಚಕಿತಳಾಗುತ್ತಾಳೆ. ಮತ್ತೊಂದೆಡೆ ನಾಯಕ್ ಮನೆತನದ ಎಲ್ಲರೂ ಶಮಂತ್ ಹಿಂದಿರುಗಿ ಬಂದಿರುವುದನ್ನು ನೋಡಿ ಸಂಭ್ರಮ ಪಡುತ್ತಾರೆ.

ಹೀಗೆ ಮುಂದೆ ಸಾಗುತ್ತಾ, ನಾಯಕ್ ಮನೆಗೆ ತನ್ನ ಪ್ರವೇಶದ ಬಳಿಕ ವಿಕ್ರಾಂತ್ ತನಗೆ ಮಾಡಿದ ದ್ರೋಹಕ್ಕೆ ಆತನ ಜೊತೆಗಿನ ಸ್ನೇಹವನ್ನು ಶಮಂತ್ ನಿರಾಕರಿಸಲು ಮುಂದಾಗುತ್ತಾನೆ. ನಂತರ ವೈಷ್ಣವಿಗೆ ಎಲ್ಲಾ ಅನಗತ್ಯ ಬಂಧಗಳಿಂದ ಮುಕ್ತಗೊಳಿಸಲು ವಿಚ್ಛೇದನವನ್ನು ನೀಡುವುದಾಗಿ ಹೇಳುತ್ತಾನೆ.ಈ ಕಾರಣದಿಂದಾಗಿ ಮುಂದೆ ವಿಕ್ರಾಂತ್ ಮತ್ತು ಸ್ಪಂದನಾ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಅವರಿಬ್ಬರು ಪರಸ್ಪರ ದೂರವಾಗುವ ಪರಿಸ್ಥಿತಿ ಎದುರಾಗುತ್ತದೆ.

ಜಾಹೀರಾತುಗಳು

ತಪ್ಪದೇ ವೀಕ್ಷಿಸಿ “ಮರಳಿ ಮನಸಾಗಿದೆ” ಸೋಮ-ಶನಿವಾರ ರಾತ್ರಿ 8.30ಕ್ಕೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ

Recent Posts

ಬರ್ತಿದೆ ಬ್ರ್ಯಾಂಡ್ ನ್ಯೂ ಸೆಲೆಬ್ರಿಟಿ ಗೇಮ್ ಶೋ ‘Huu ಅಂತೀಯಾ…Uhuu ಅಂತೀಯಾ’.. ಮೇ 19 ರಿಂದ ಪ್ರತಿ ಭಾನುವಾರ ರಾತ್ರಿ 7 ಗಂಟೆಗೆ…!

ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಗಳ ಸರದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ 'Huu ಅಂತೀಯಾ...Uhuu…

5 days ago

ಶೀಮದ್‌ ರಾಮಾಯಣ , ಉದಯ ಟಿವಿಯಲ್ಲಿ ಮೇ 20 ರಿಂದ ಸೋಮವಾರ-ಶನಿವಾರ ಸಂಜೆ 6 ಗಂಟೆಗೆ

ಉದಯ ಟಿವಿ ಶೀಮದ್‌ ರಾಮಾಯಣ ಕನ್ನಡ ಟೆಲಿವಿಷನ್‌ ಕ್ಷೇತ್ರದ ತಾಯಿಬೇರಿನಂತಿರುವ ಉದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ…

6 days ago

ಸುವರ್ಣ ಗೃಹಮಂತ್ರಿ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ

ಸ್ಟಾರ್ ಸುವರ್ಣ - ಸುವರ್ಣ ಗೃಹಮಂತ್ರಿ ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು…

1 week ago

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

2 weeks ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

3 weeks ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

4 weeks ago