ಸ್ಟಾರ್ ಸುವರ್ಣ

ಸ್ಟಾರ್ ಸುವರ್ಣದಲ್ಲಿ “ಕಥೆಯೊಂದು ಶುರುವಾಗಿದೆ” ಇದೇ ನವೆಂಬರ್ 28ರಂದು, ಸೋಮವಾರದಿಂದ ಸಂಜೆ 7 ಗಂಟೆಗೆ

ಜಾಹೀರಾತುಗಳು
Katheyondu Shuruvagide Serial on Star Suvarna
Katheyondu Shuruvagide Serial on Star Suvarna

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಪ್ರೇಕ್ಷಕರಿಗೆ ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮುದ್ದುಮಣಿಗಳು, ಮನಸೆಲ್ಲಾನೀನೇ, ಮರಳಿಮನಸಾಗಿದೆ, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯು ಹೊಸದೊಂದು ಧಾರವಾಹಿಯನ್ನು ಶುರುಮಾಡಲು ಸಜ್ಜಾಗಿದೆ ಅದೇ “ಕಥೆಯೊಂದು ಶುರುವಾಗಿದೆ”.
.
“ಕಥೆಯೊಂದು ಶುರುವಾಗಿದೆ” ಇದು ಮೂರು ಜೋಡಿಗಳು ಹಾಗೂ ಎರಡು ಮನೆತನಗಳ ಮಧ್ಯೆ ನಡೆಯುವ ಪ್ರೀತಿ ಸಂಘರ್ಷದ ಅದ್ದೂರಿ ಧಾರಾವಾಹಿ.

ಈ ಧಾರವಾಹಿಯ ಕಥಾ ನಾಯಕಿ ಕೃತಿ, ಈಕೆ ಮಧ್ಯಮ ಕುಟುಂಬದ ಹುಡುಗಿಯಾಗಿರುತ್ತಾಳೆ. ತುಂಬಾ ಸ್ವಾಭಿಮಾನಿ, ಇಡೀ ಮನೆಯ ಜವಾಬ್ದಾರಿ ಹೊತ್ತು ಮನೆ ನಡೆಸುವ ರಾಯಭಾರಿ. ಇವಳು ತುಂಬಾ ಸಿಂಪಲ್. ಹಾಗಂತಾ ಪಾಪದ ಹುಡ್ಗಿ ಅನ್ಕೋಬೇಡಿ, ಇವಳ ಮಾತು-ನಡುವಳಿಕೆ ಅಷ್ಟೇ ಖಡಕ್, ಸದಾ ಮನೆಯ ಒಳಿತನ್ನೇ ಬಯಸೋ ಈಕೆ ಎಷ್ಟೇ ಕಷ್ಟ ಬಂದ್ರು ನಗುತ್ತಾ ಮನೆ ನಿಭಾಯಿಸೋ ಛಲಗಾರ್ತಿ. ಚಿತ್ರಕಲೆಯೇ ಇವಳ ವೃತ್ತಿ, ಫ್ಯಾಮಿಲಿ ಅಂದ್ರೆ ಈಕೆಗೆ ಪಂಚಪ್ರಾಣ, ನಂಬಿಕೆಯನ್ನೇ ಶಕ್ತಿಯನ್ನಾಗಿಸಿರೋ ಈಕೆ ಕುಟುಂಬದ ಗೌರವವನ್ನು ಉಳಿಸಲು ಯಾವ ಸವಾಲನ್ನು ಬೇಕಿದ್ರೂ ಎದುರಿಸೋಕೂ ರೆಡಿಯಾಗಿರುತ್ತಾಳೆ. ಸಮಾಜದಲ್ಲಿ ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ, ಗಂಡಿಗೆ ಸರಿ ಸಮಾನಾಗಿ ನಿಲ್ಲೋ ಸಾಮರ್ಥ್ಯ ಹೆಣ್ಣಿಗಿದೆ ಎಂದು ತೋರಿಸೋಕೆ ‘ಹೆಣ್ಮಕ್ಳೆ ಸ್ಟ್ರಾಂಗು ಗುರು’ ಎಂಬ ನಾಮಪದದಡಿ ಸಮಾಜದಲ್ಲಿರೋ ಹೆಣ್ಣುಕುಲಕ್ಕೆ ಸ್ಫೂರ್ತಿಯಾಗಿ ನಿಲ್ತಿದ್ದಾಳೆ ನಮ್ ಕೃತಿ.

ಇನ್ನು ಈ ಕಥೆಯ ನಾಯಕ ಯುವರಾಜ್ ಬಹದ್ದೂರ್. ಬಹದ್ದೂರ್ ಫ್ಯಾಮಿಲಿಗೆ ಇವನೇ ಹಿರಿಮಗ. ಆದರೆ ಸ್ವಲ್ಪ ಅಹಂಕಾರಿ, ಇವನ ನಿರ್ಧಾರ ತುಂಬಾ ಅಚ್ಚುಕಟ್ಟು ಇವನು ತುಂಬಾ ಕಟ್ಟುನಿಟ್ಟು. ಮಾತಲ್ಲಿ ಮನೆಕಟ್ದೇ ಕೆಲಸ ಮಾಡಿ ತೋರಿಸೋ ಇವನು ಕೆಲಸಕ್ಕೆ ತುಂಬಾ ಪ್ರಾಮುಖ್ಯತೆ ಕೊಡ್ತಾನೆ. ಈತ ಬಹದ್ದೂರ್ ವಂಶದ ಮರ್ಯಾದೆಯನ್ನು ಎತ್ತಿ ಹಿಡಿಯುವ ರಾಜಸಿಂಹ. ಇವನಿಗೆ ಇಬ್ಬರು ಸಹೋದರರು. ಖ್ಯಾತ ವಜ್ರದ ಬ್ಯುಸಿನೆಸ್ ಮ್ಯಾನ್ ಆಗಿರುವ ಈತ ವಜ್ರದಷ್ಟೆ ಪರ್ಫೆಕ್ಟ್. ಅಷ್ಟೇ ಅಲ್ಲದೆ ಈತನಿಗೆ ಸುತ್ತಮುತ್ತ ಇರೋರು ಕೂಡ ಪರ್ಫೆಕ್ಟ್ ಆಗಿಯೇ ಇರಬೇಕು.

ಜಾಹೀರಾತುಗಳು

ಒಬ್ಬಳು ಸ್ವಾಭಿಮಾನಿ, ಇನ್ನೊಬ್ಬ ಅಹಂಕಾರಿ. ಸ್ವಾಭಿಮಾನಿ ಹಾಗು ಅಹಂಕಾರಿಗಳ ನಡುವೆ ನಡೆಯುವ ಜಿದ್ದಾ ಜಿದ್ದಿಯೇ ಈ ಧಾರಾವಾಹಿಯ ಕಥಾಹಂದರ. ಈ ಭಿನ್ನ ಜಗತ್ತಿನ ವಿಭಿನ್ನ ಮನಸುಗಳು ಹೇಗೆ ಒಂದಾಗುತ್ತೆ ಅನ್ನೋದನ್ನು ಕಾದುನೋಡಬೇಕಿದೆ. ಅಷ್ಟೇ ಅಲ್ಲದೆ ಈ ಧಾರಾವಾಹಿಯಲ್ಲಿ ಅಕ್ಕ-ತಂಗಿಯರ ಸಂಬಂಧ, ಅಣ್ಣ-ತಮ್ಮಂದಿರ ಭಾಂಧವ್ಯ ಹೇಗಿರಬೇಕು ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ.
.
“ಕಥೆಯೊಂದು ಶುರುವಾಗಿದೆ” ಧಾರಾವಾಹಿಯು ಜನಪ್ರಿಯ ಹಿರಿಯ ಕಲಾವಿದರೊಂದಿಗೆ ಒಂದು ಸುಂದರವಾದ ತಾರಾಬಳಗವನ್ನು ಹೊಂದಿದ್ದು ಸುಂದರ್ ಶ್ರೀ, ಸಹನಾ, ಅಭಿನಯ, ಭವಾನಿ, ಸುಜಾತ ಅಕ್ಷಯ, ಸುಜಯ್, ಭವಿಶ್, ಇಂಚರ ಜೋಶಿ ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ.

ಹೊಚ್ಚ ಹೊಸ ಧಾರವಾಹಿ “ಕಥೆಯೊಂದು ಶುರುವಾಗಿದೆ” ಇದೇ ನವೆಂಬರ್ 28 ರಂದು, ಸೋಮವಾರದಿಂದ ಸಂಜೆ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.

Recent Posts

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

2 days ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

6 days ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

2 weeks ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

2 weeks ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

3 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

4 weeks ago