ಉದಯ ಟಿವಿ

ಕಸ್ತೂರಿ ನಿವಾಸ ೫೦೦ ರ ಸಂಭ್ರಮ ಸೋಮವಾರದಿಂದ ಶನಿವಾರ ಸಂಜೆ ೭ಕ್ಕೆ

ಜಾಹೀರಾತುಗಳು
Kasturi Nivasa Serial Udaya
Kasturi Nivasa Serial Udaya

ಉದಯ ಟಿವಿ ವೈವಿಧ್ಯಮಯ ಧಾರಾವಾಹಿಗಳನ್ನ ನೀಡುತ್ತಾ ಜನಮಾನಸದಲ್ಲಿ ಮನೆ ಮಾಡಿದೆ. ಸಂಜೆ 6ರಿಂದ ಪ್ರಸಾರವಾಗುವ ಯಾರಿವಳು ಧಾರಾವಾಹಿಯಿಂದ ರಾತ್ರಿ 10ರ ಸೇವಂತಿ ವರೆಗೂ ಮನರಂಜನೆಯ ಮಹಾಪೂರವನ್ನೇ ಹರಿಸಿದೆ. ಸಂಬಂಧಗಳ ಮೌಲ್ಯವನ್ನ , ಒಟ್ಟು ಕುಟುಂಬದ ಆನಂದವನ್ನ ಸಾರುವ ಧಾರಾವಾಹಿ ಕಸ್ತೂರಿ ನಿವಾಸ. ಸೋಮವಾರದಿಂದ ಶನಿವಾರದವರೆಗೂ ಸಂಜೆ 7ಕ್ಕೆ ಪ್ರಸಾರವಾಗೋ ಈ ಧಾರಾವಾಹಿಗೆ ಈಗ 500ರ ಮೈಲಿಗಲ್ಲು. ಪಾರ್ವತಿಯ ಹಾಗೆ ಅತ್ತೆ , ಕಸ್ತೂರಿಯಂತ ತಾಯಿಯ ಮಡಿಲು ರಾಘವನಂತ ಸಂಗಾತಿ , ಸತ್ಯಭಾಮ-ನಾಗವೇಣಿಯಂತ ಅತ್ತಿಗೆಯಂದಿರು ಹೀಗೆ ಪ್ರತಿ ಪಾತ್ರವೂ ತನ್ನದೇ ರೀತಿಯಲ್ಲಿ , ತನ್ನದೇ ಶೈಲಿಯಲ್ಲಿ ಪ್ರೇಕ್ಷಕರ ಹೃದಯವನ್ನ ಗೆದ್ದಿದೆ, ಮೃದುಲಾ ಪಾತ್ರ ಈ ಕಾರ್ಯಕ್ರಮದ ಕೇಂದ್ರಬಿಂದು.

ಆ ಪಾತ್ರದ ಅಂತ್ಯಕ್ಕೆ ತೆರೆ ಮೇಲಿನಷ್ಟೆ ಅಲ್ಲದೆ ತೆರೆ ಹಿಂದೆಯೂ ವೀಕ್ಷಕ ವರ್ಗ ಭಾವುಕರಾಗಿದ್ದಾರೆ. ಹಾಗೆ ಖುಷಿ ಅನ್ನೋ ಪಾತ್ರ ಹೆಸರಿನಂತೆಯೇ ಕಸ್ತೂರಿ ನಿವಾಸಕ್ಕೆ ಖುಷಿ ತಂದಿದೆ. ಕಸ್ತೂರಿ ನಿವಾಸ ದೊಡ್ಡ ತಾರಾ ಬಳಗವನ್ನೇ ಹೊಂದಿದೆ. ಆಶಾರಾಣಿ , ಪದ್ಮಾವಾಸಂತಿ , ಜ್ಯೋತಿ ರೈ, ಸುಂದರಶ್ರಿ , ಋತು , ನರೇಶ , ದಿಲೀಪ್ ಶೆಟ್ಟಿ , ರಿಷಾ , ಸಿತಾರಾ , ಸುವೇದ್ , ವಿನಯ್ ರಾಮಪ್ರಸಾದ್ ಹೀಗೆ ದೊಡ್ಡ ಪಟ್ಟಿಯೇ ಇದೆ. ಜೊತೆಗೆ ಅತಿಥಿಯಾಗಿ ಕನ್ನಡದ ಮೇರು ನಟ ಶ್ರೀನಿವಾಸ ಮೂರ್ತಿ ಕೂಡಾ ಭಾಗಿಯಾಗಿದ್ದಾರೆ.ದೇವಿ ಸ್ಟುಡಿಯೋಸ್ ನಿರ್ಮಾಣದಲ್ಲಿ ತಯಾರಾಗ್ತಿರೊ ಕಸ್ತೂರಿ ನಿವಾಸದ ನಿರ್ದೆಶಕರಾಗಿ ಮುಸ್ಸಂಜೆ ಮಹೇಶ ಕಾರ್ಯ ನಿರ್ವಹಿಸುತ್ತಿದ್ದಾರೆ. ಹತ್ತು ಹಲವಾರು ಧಾರಾವಾಹಿಗಳನ್ನ ಸೆರೆಹಿಡಿದ ಪದ್ಮನಾಭನ್ ಮಣೆ, ಅದ್ಬುತ ದೃಶ್ಯಗಳನ್ನು ಈ ಧಾರಾವಾಹಿಯಲ್ಲಿ ಚಿತ್ರಿಕರಿಸುತ್ತಿದ್ದಾರೆ , ಮಲ್ಲಿಕಾರ್ಜುನ ಸ್ವಾಮಿ ಸಂಕಲನ ಮಾಡುತ್ತಿದ್ದಾರೆ.

“ನಾನು ಈ ಧಾರಾವಾಹಿಗೆ ಪ್ರವೇಶಿಸೋ ಮುನ್ನವೇ ಕಸ್ತೂರಿ ನಿವಾಸ ಎಲ್ಲರಿಗೂ ಪರಿಚಿತವಾಗಿತ್ತು. ನನಗೆ ಜವಾಬ್ದಾರಿ ಹೆಚ್ಚಿತ್ತು, ತಂಡದ ಸಹಾಯದಿಂದ ಎಲ್ಲರಲ್ಲೂ ನಾನು ಕೂಡ ಒಬ್ಬಳಾದೆ , ಖುಷಿ ಹುಟ್ಟುಹಬ್ಬದ ಸಂಚಿಕೆಗಳು ನನ್ನ ಫೇವರೇಟ್‌’’ ಎಂದು ಸಂತಸ ಹಂಚಿಕೊಳ್ಳುತ್ತಾರೆ ಖುಷಿ ಪಾತ್ರದಾರಿ ರಿಷಾ. “ಪಾರ್ವತಿ ತೆರೆ ಮೇಲೇ ಅಷ್ಟೇ ಅಲ್ಲ ತೆರೆ ಹಿಂದೆಯೂ ಅಮ್ಮನಂತೆಯೇ. ಹೀಗೆ ಎಲ್ಲರು ಕಂತುಗಳಲ್ಲಿ ಕಂಡಂತೆ ತೆರೆಯ ಹಿಂದೆಯೂ ಕುಟುಂಬದಂತೆ ಇರುತ್ತೇವೆ . ವೃತ್ತಿ ಬದುಕಲ್ಲಿ ಕಸ್ತೂರಿ ನಿವಾಸ ನನ್ನ ಸ್ಪೇಷಲ್ ಪ್ರಾಜೆಕ್ಟ್ ‘’ ಎಂದು ನಾಯಕ ದಿಲೀಪ್ ಶೆಟ್ಟಿ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಜಾಹೀರಾತುಗಳು

ವೀಕ್ಷಕ ವರ್ಗದ ಎಲ್ಲಾ ಪ್ರಶ್ನೆಗಳಿಗೂ, ಅಪೇಕ್ಷೆಗಳಿಗೂ ಮುಂಬರುವ ಕಂತುಗಳು ಉತ್ತರಿಸಲಿದೆ ಎಂದು ಹೇಳಿ 500ರ ಸಂಭ್ರಮದ ಸಂತಸವನ್ನು ಹಂಚಿಕೊಳ್ಳುತ್ತಾರೆ ಕಸ್ತೂರಿ ನಿವಾಸ ತಂಡ. ಕಸ್ತೂರಿ ನಿವಾಸ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Recent Posts

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

3 days ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

1 week ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

1 week ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

2 weeks ago

ಬೊಂಬಾಟ್ ಭೋಜನ’ದಲ್ಲಿ ಯುಗಾದಿ ಸಂಭ್ರಮ….ಹಬ್ಬದೂಟಕ್ಕೆ ಆಗಮಿಸಿದ ಸ್ಯಾಂಡಲ್ವುಡ್ ಸ್ಟಾರ್ಸ್..!

ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…

4 weeks ago

ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯಲ್ಲಿ ‘ವರಲಕ್ಷ್ಮಿ ಕಲ್ಯಾಣ’ , ಮಹಾ ತಿರುವುಗಳುಳ್ಳ ಸಂಚಿಕೆಗಳು ಇದೇ ಸೋಮ-ಶನಿ ಸಂಜೆ 6.30 ಕ್ಕೆ.

ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…

4 weeks ago