ಮನರಂಜನೆಗೆ ಮತ್ತೊಂದು ಹೆಸರು ಉದಯ ಟಿವಿ. ಬೆಳಗಿನ ಕಾರ್ಯಕ್ರಮಗಳಿಂದ ಶುರುವಾಗಿ ಸೂಪರ್ ಹಿಟ್ ಚಲನಚಿತ್ರಗಳ ಧಮಾಕಾದೊಂದಿಗೆ ಮುದ ನೀಡುವ ಧಾರಾವಾಹಿಗಳು ಒಳಗೊಂಡು ಪ್ರೇಕ್ಷಕನ ಮನಸ್ಸಿನಲ್ಲಿ ಮನೆ ಮಾಡಿದೆ. ಜನಮೆಚ್ಚಿದ ಧಾರಾವಾಹಿಗಳಲ್ಲಿ ಒಂದಾದ ಕಸ್ತೂರಿ ನಿವಾಸ 350 ಸಂಚಿಕೆಗಳನ್ನ ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಒಟ್ಟು ಕುಟುಂಬದ ಆನಂದವನ್ನ ಅತ್ತೆ ಸೊಸೆ ಬಾಂಧವ್ಯವನ್ನ ಈ ಧಾರಾವಾಹಿಯ ಪ್ರಮುಖ ಅಂಶ. ಕಥಾ ಹಂದರದಲ್ಲಿ ಹೊಸತನ ಅಳವಡಿಸುತ್ತಾ ,ಹಂತ ಹಂತಕ್ಕೂ ತಿರುವುಗಳನ್ನ ನೀಡುತ್ತಾ ಪ್ರೇಕ್ಷಕ ವರ್ಗವನ್ನ ಸೆಳೆಯುತ್ತಿದೆ.
ಇದೀಗ ನಾಯಕ ರಾಘವ್ , ನಾಯಕಿ ಮೃದುಲಾಳ ಹ್ಯಾಪಿ ಡೇಸ್ ಗೆ ಈಡಿ ತಂಡ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದೆ. ಉದಯ ಟಿವಿಯ ಜೋಡಿ ಎಂದೆ ಪ್ರಖ್ಯಾತಗೊಂಡಿರೊ ಈ ಜೋಡಿಯ ಬದುಕಿನಲ್ಲಿ ಹೊಸದೊಂದು ತಿರುವು ಮುಂಬರಲಿದ್ದು ಅದು ಪ್ರಕೃತಿಯ ತಪ್ಪಲಲ್ಲಿ ನಡೆಯಲಿದೆ. ಚಿಕ್ಕಮಗಳೂರಿನ ಪ್ರಸಿಧ್ದ ತಾಣಗಳಾದ ಮುಳೈನಗಿರಿ , ಕಾಪು ಲೈಟ್ ಹೌಸ್,ಬಾಬಾ ಬುಡನಗಿರಿ ,ಸುಂದರ ಕಾಫಿ ತೋಟಗಳು ಹೀಗೆ ಹತ್ತು ಹಲಾವಾರು ಜನಪ್ರೀಯ ತಾಣಗಳಲ್ಲಿ ಚಿತ್ರಿಕರಣಮಾಡಲಾಗಿದೆ. ಅಷ್ಟೆ ಅಲ್ಲದೆ ಮಂಗಳೂರಿನ ಸುತ್ತ ಮುತ್ತಲೂ ತಂಡ ರಾಘವ್ ಮೃದುಲಾ ರೊಂಮಾಟಿಕ್ ಜರ್ನಿಯಲ್ಲಿ ಕರೆದೊಯುತ್ತಿದೆ. ಸೇಯಂಟ್ ಮೇರಿಸ್ ಐಲಾಂಡ್ನಲ್ಲೂ ಸುಂದರ ದೃಶ್ಯಗಳು ಕಸ್ತೂರಿ ನಿವಾಸ ಧಾರಾವಾಹಿಯಲ್ಲಿ ಕಾಣಬಹುದು.
ಕಸ್ತೂರಿ ನಿವಾಸ ಧಾರಾವಾಹಿ ಈ ವಿಶೇಷ ಸಂಚಿಕೆಗಳು ಸೋಮವಾರದಿಂದ ಶನಿವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…
ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…
ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…
ಸ್ಟಾರ್ ಸುವರ್ಣ ವಾಹಿಯಲ್ಲಿ ಸಾವಿರ ಸಂಚಿಕೆಗಳನ್ನು ದಾಟಿ, ಹೊಸ ಮೈಲಿಗಲ್ಲು ಸೃಷ್ಟಿಸಿ ಕರುನಾಡಿನ ಮನಗೆದ್ದ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ…
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಮನರಂಜನೆಗೆ ಹೊಸ ಆಯಾಮ ನೀಡುತ್ತಾ ಬಂದಿದೆ. ಪ್ರಸ್ತುತ 'ಲಕ್ಷ್ಮಿ ಟಿಫನ್ ರೂಮ್ ಧಾರಾವಾಹಿಯು…
ಮನೋರಂಜನೆಯ ಮಾತು ಬಂದಾಗಲೆಲ್ಲ ಎಲ್ಲಾ ಮನೆಯ ಟಿವಿಯು ಟ್ಯೂನ್ ಆಗೋದೇ ಜೀ಼ ಕನ್ನಡಕ್ಕೆ. ಕರುನಾಡನ್ನ ದಶಕಗಳಿಂದ ಮನೋರಂಜಿಸುತ್ತ ಬಂದಿರುವ ಜೀ಼…