ಜೀ ಕನ್ನಡ ಚಾನೆಲ್

ಕಫಲ್ಸ್ ಕಿಚನ್ – ಶನಿ-ಭಾನು ಮಧ್ಯಾಹ್ನ 12ಕ್ಕೆ. ನೀವು ನಿಮ್ಮ‌ , ಸಂಗಾತಿ ಒಟ್ಟಿಗೇ ಸೇರಿ ಮಾಡಿದ ಮೊದಲ ಅಡುಗೆ ಯಾವುದು?

ಜಾಹೀರಾತುಗಳು
Couples Kitchen Zee Kannada
Couples Kitchen Zee Kannada

ದಶಕಗಳು ಮೀರಿದರು ಮನೋರಂಜನ ಲೋಕದ ಆದಿಪತ್ಯ ಉಳಿಸಿಕೊಂಡಿರುವ ಜೀ ಕನ್ನಡ ವಾಹಿನಿ,ವೀಕೆಂಡ್ ಆಯ್ತಂದ್ರೆ ತನ್ನ ರಿಯಾಲಿಟಿ ಶೋಗಳ ಮೂಲಕ ರಿಯಲ್ ಎಂಟರ್‌ಟೈನ್‌ಮೆAಟ್ ಕೊಡೋಕೆ ರೆಡಿಯಾಗಿರುತ್ತೆ,ಈಗಾಗಲೇ ಹಲವಾರ ರಿಯಾಲಿಟಿ ಶೋಗಳ ಮೂಲಕ ಕರುನಾಡಿನಲ್ಲಿ ಮನೆಮಾತಾಗಿರುವ ಜೀ಼ ಕನ್ನಡ ವಾಹಿನಿ ಈಗ ಮನೆಮಂದಿಗೆಲ್ಲ ಮಧ್ಯಾಹ್ನದ ಮನೋರಂಜನೆ ಕೊಡೋಕೆ ಅಂತಾನೆ ರೆಡಿಮಾಡಿರೋ ಶೋನೆ ಈ “”ಕಪಲ್ಸ್ ಕಿಚನ್”ಇಲ್ಲಿ ಬರೀ ಮನೋರಂಜನೆ ಇರಲ್ಲ ಇಲ್ಲಿ””ಅವರ ಕೈ ಅಡುಗೆ,ಅವgನ್ನÀ ಒಂದು ಮಾಡಿದ ಮದುವೆಯೆಂಬ ಬೆಸುಗೆಯ ಕಥೆ ಇಲ್ಲಿರುತ್ತೆ.

ವೀಕೆಂಡ್ ಆದ್ರೆ ಎಲ್ಲಿ ಹೋಗೋಣ ಅಂತ ಯೋಚನೆ ಮಾಡೋ ಕಫಲ್ಸ್,ಗಂಡ ಮನೇಲೆ ಇದ್ರೆ ಏನು ಅಡುಗೆ ಮಾಡಲಿ ಅನ್ನೋ ಹೆಂಡತಿ,ಯಾವಾಗಲು ಹೆಂಡತಿನೆ ಅಡುಗೆ ಮಾಡ್ತಾಳಲ್ಲ ಅವಳಿಗೆ ನನ್ನ ಕೈರುಚಿ ತೋರಿಸೋಣ ಅನ್ನೋ ಗಂಡ,ಹೀಗೆ ವೀಕೆಂಡ್ ಬಂತು ಅಂದ್ರೆ ಅಡುಗೆಗೆ ಅಟೆನ್ಷನ್ ಕೊಡೋ ಕಪಲ್ಸ್ ಕಂಪಲ್ಸರಿ ನೋಡಬೇಕಾಗಿರೋ ಕಾರ್ಯಕ್ರಮ ಇದು.ಮನುಷ್ಯ ಏನು ಕೊಟ್ಟರು ಸಾಕು ಅನ್ನೋಲ, ಆದ್ರೆ ಊಟ ಮಾತ್ರ ಸಾಕು ಹೊಟ್ಟೆ ತುಂಬಿತು ಅನ್ನುತ್ತಾನೆ.ಮನುಷ್ಯನ ಹೊಟ್ಟೆ ತುಂಬಿಸಿ ಅವನನ್ನ ಖುಷಿ ಪಡಿಸೋ ಈ ಅಡುಗೆ ಎಷ್ಟೋ ಸಂಬAಧಗಳನ್ನ ಬೆಸೆದಿದೆ.ಪ್ರತಿ ಸಂಬAಧ ಒಂದು ಕಪ್ ಕಾಫಿಯಲ್ಲಿ ಶುರುವಾಗಿ ಅಡುಗೆ ಮನೆಯಲ್ಲಿ ಬಂದು ಒಂದಾಗುತ್ತದೆ, ಇದು ಎಲ್ಲ ಸಂಬAಧಗಳ ಶುರುವಾಗುವ ಪರಿ.

ಒಬ್ಬರನೊಬ್ಬರು ಅರಿತುಕೊಂಡು ದಾಂಪತ್ಯ ಜೀವನ ಸಾಗಿಸೋ ಪ್ರತಿ ದಂಪತಿಗಳನ್ನ ಹತ್ತಿರಕ್ಕೆ ತರೋದೆ ಈ ಅಡುಗೆ.ಆದ್ರೆ ಈ ಬಾರಿ ಕಫಲ್ಸ್ ಕಿಚನ್ ಅಡುಗೆ ಮನೆ ನಿಮ್ಮ ಮನೆಗೆ ಕರೆತರುತ್ತಿರೋದು ಮಾತ್ರ ಸಲಬ್ರಿಟಿ ಕುಕ್ಕುಗಳನ್ನ ಅಂದ್ರೇ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಸಲಬ್ರಿಟಿ ಜೋಡಿಗಳÀ ಕೈಯಲ್ಲಿ ಹೊಸರುಚಿಯನ್ನ ಮಾಡಿಸ್ತಾ ಅದನ್ನ ಸವಿಯುತ್ತ ಅವರ ಪ್ರೇಮ್ ಕಹಾನಿ,ಮದುವೆ ಜೀವನದ ಕಥೆಯನ್ನ ಎಳೆಎಳೆಯಾಗಿ ಬಿಚ್ಚಿಡುತ್ತಾ ಸಾಗುವ ಈ ಕಾರ್ಯಕ್ರಮದ ಜವಾಬ್ದಾರಿಯನ್ನ ಹೊತ್ತಿರೋದು ಮಾಸ್ಟರ್ ಆನಂದ್.

ತೆರೆಮೇಲೆ ನಮ್ಮನ್ನ ಮನೋರಂಜಿಸೋ ಪ್ರತಿ ಸಲಬ್ರಟಿ ಈ ಅಡುಗೆ ಮನೆಗೆ ಬಂದಾಗ ನಳಮಹಾರಾಜರಾಗಿ ಬಿಡುತ್ತಾರೆ,ಯಾವಾಗಲು ಬಣ್ಣ ಹಚ್ಚಿ ನಿಮ್ಮನ್ನ ರಂಜಿಸೋ ನಿಮ್ಮ ನೆಚ್ಚಿನ ನಟನಟಿಯರು ಅಡುಗೆ ಮಾಡೋಕೆ ಸೌಟ್ ಹಿಡಿಯೋದನ್ನ ನೋಡೋದೆ ಒಂದು ಖುಷಿ,ಅಡುಗೆ ಮಾಡೋಕೆ ಅಂತ ಒಲೆ ಹಚ್ಚಿ ತಮ್ಮ ಪ್ರೇಮ್ ಕಹಾನಿ ಶುರುಮಾಡಿದ್ರೆ,ಆಗಾಗ ಅಡುಗೆಗೆ ಬೀಳೋ ಮಸಾಲೆ ಜೊತೆ ಅವರ ಜೀವನದ ಸುಂದರ ಕ್ಷಣವನ್ನ ರಸವತ್ತಾಗಿ ನಿಮ್ಮ ಮುಂದೆ ಬಿಚ್ಚಿಡುತ್ತಾ ಸಾಗುತ್ತಾರೆ,ಹೆಂಡತಿನ ಇಂಪ್ರೆಸ್ ಮಾಡೋಕೆ ಗಂಡ,ಗAಡನ ಕೈರುಚಿ ನೋಡೋಕೆ ಕಾದಿರೋ ಹೆಂಡತಿ ಇಬ್ಬರು ಪರಸ್ಪರ ತಮ್ಮ ಕಾಲುಗಳನ್ನ ಎಳೆದುಕೊಳ್ಳುತ್ತ ಅಡುಗೆ ಮಾಡಿ ಕನ್ನಡಿಗರ ಮುಂದೆ ಇಡುತ್ತಾರೆ.

ಜಾಹೀರಾತುಗಳು

ಜಗಮಗಿಸೋ ಸೆಟ್ಟಿನಲ್ಲಿ ಅಡುಗೆ ಮನೆಯೆಂಬ ಅರಮನೆಯಲ್ಲಿ ಸ್ಟಾರ್ ದಂಪತಿಗಳ ಅಡಿಗೆ ರುಚಿಯನ್ನ ಸವಿಯುವುದರ ಜೊತೆಗೆ, ಅವರಿಗೆ ಹೊಸ ಅಡುಗೆಯೊಂದನ್ನ ಹೇಳಿಕೊಡೋಕೆ ಸ್ಪೇಷಲ್ ಶೆಫ್ ಕೂಡ ಅಲ್ಲಿ ಹಾಜರಿರುತ್ತಾರೆ.ಶೆಫ್ ಮಾರ್ಗದರ್ಶನದಲ್ಲಿ ಹೊಸ ಅಡುಗೆ ಕಲಿಯೋ ಸ್ಟಾರ್ ದಂಪತಿಗಳು ತಮ್ಮ ಜೀವನದ ಕಥೆಯನ್ನ ಹೇಳುತ್ತಾ ಸಾಗುವ ಈ ಹೊಸ ಶೋನಲ್ಲಿ ಮೊದಲ ಅತಿಥಿಗಳಾಗಿ ಮಿಲನ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಹಾಗು ಅಭಿಜಿತ್ ಮತ್ತು ರೋಹಿಣ Ã ದಂಪತಿಗಳು ಭಾಗವಹಿಸಲಿದ್ದು ಈ ಕಾರ್ಯಕ್ರಮ ಇದೆ ೨೨.೭.೨೦೨೩ರಿಂದ ಪ್ರತಿಶನಿವಾರ ಮತ್ತು ಭಾನುವಾರ ಮಧ್ಯಾಹ್ನ ೧೨.೦೦ಕ್ಕೆ ನಿಮ್ಮ ನೆಚ್ಚಿನ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಮನೆಮಂದಿಯನ್ನೆಲ್ಲ ಹಿಡಿದಿಡೋಕೆ ಆಗೋ ಒಂದೇ ಒಂದು ವಿಷಯ ಅಂದ್ರೆ ಅದು ಅಡುಗೆ,ಈ ಅಡುಗೆ ಕೈರುಚಿಯನ್ನೆ ಪ್ರಧಾನವಾಗಿ ಇಟ್ಟುಕೊಂಡು ರ‍್ತಿರೋ ಈ ಕಾರ್ಯಕ್ರಮ ಕಪಲ್ಸ್ ಕಿಚನ್‌ನಲ್ಲಿ ಮನೋರಂಜನೆಗೆ ಕೊರತೆ ಇರಲ್ಲ, ಇಲ್ಲಿ ಬರೋ ಪ್ರತಿ ಸಲಬ್ರಟಿ ತಮ್ಮ ಪಾಕಪ್ರಾವಿಣ್ಯತೆಯನ್ನ ಕರುನಾಡಿಗೆ ತೋರಿಸುವುದರ ಜೊತೆಗೆ ತಮ್ಮ ಬಾಳಸಂಗಾತಿಯನ್ನ ಇಂಪ್ರೆಸ್ ಮಾಡಿದ ಕಥೆಯ ಬಿಚ್ಚಿಡುತ್ತಾರೆ, ಒಟ್ಟಿನಲ್ಲಿ ಈ ಕಾರ್ಯಕ್ರಮ ಉಳಿದ ಕುಕರೀ ಶೋಗಳಿಗಿಂತ ವಿಭಿನ್ನವಾಗಿ ನಿಲ್ಲುವ ಎಲ್ಲ ಗ್ಯಾರಂಟಿಯನ್ನ ನಾವು ಕರುನಾಡಿಗೆ ಕೊಡಲು ಬಯಸುತ್ತೇವೆ.

Recent Posts

ಸುವರ್ಣ ಗೃಹಮಂತ್ರಿ ಇದೇ ಸೋಮವಾರದಿಂದ ಮಧ್ಯಾಹ್ನ 1 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ

ಸ್ಟಾರ್ ಸುವರ್ಣ - ಸುವರ್ಣ ಗೃಹಮಂತ್ರಿ ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು…

12 hours ago

ಜಾನಕಿ ಸಂಸಾರ, ತುಂಬು ಪ್ರೀತಿಯ ಸ್ವಾದವನ್ನು ಹೊತ್ತು ಬರ್ತಿದೆ ಹೊಸ ಕಥೆ ಇದೇ ಸೋಮವಾರದಿಂದ ರಾತ್ರಿ 8 ಗಂಟೆಗೆ

ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…

1 week ago

ಬೊಂಬಾಟ್ ಭೋಜನ’ದಲ್ಲಿ ಕಾರ್ಮಿಕರ ದಿನಾಚರಣೆ ಸ್ಪೆಷಲ್…ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..!

ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…

2 weeks ago

ಸಲಾರ್ , ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಬ್ಲಾಕ್ ಬಸ್ಟರ್ ಸಿನಿಮಾ ನೋಡುಗರಿಗೆ ಬೈಕ್ ಗೆಲ್ಲುವ ಅವಕಾಶ…ಇದೇ ಭಾನುವಾರ ರಾತ್ರಿ 7 ಗಂಟೆಗೆ..!

ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…

2 weeks ago

ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…

2 weeks ago

ಬೊಂಬಾಟ್ ಭೋಜನದಲ್ಲಿ “ರಾಮನವಮಿ” ವಿಶೇಷ ಸಂಚಿಕೆಯು ಇದೇ ಬುಧವಾರ ಮಧ್ಯಾಹ್ನ 12 ಗಂಟೆಗೆ

ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…

4 weeks ago