ಬದುಕಿನಲ್ಲಿ ನಡೆದಿದ್ದ ಕಹಿ ಘಟನೆಗಳಿಂದಾಗಿ ಕಥಾನಾಯಕಿ ಶ್ರಾವಣಿ ವಿದೇಶದಲ್ಲಿರ್ತಾಳೆ, ಆದರೆ 4 ವರ್ಷಗಳ ಬಳಿಕ ಶ್ರಾವಣಿ ತನ್ನ ದೊಡ್ಡಪ್ಪನ ಮಗಳ ಮದುವೆಯ ಸಲುವಾಗಿ ವಿದೇಶದಿಂದ ಮರಳುತ್ತಾಳೆ. ಆಗ ಶ್ರಾವಣಿಗೆ ತಾನು ಪ್ರೀತಿಸಿ ಮದುವೆಯಾಗಿ ವಿಚ್ಚೇದನ ಪಡೆದ ಅಭಿಮನ್ಯು, ತನ್ನ ತಂಗಿಯನ್ನು ಮದುವೆಯಾಗಲಿರುವ ಹುಡುಗ ಎಂಬ ಸತ್ಯ ಅರಿವಿಗೆ ಬರುತ್ತದೆ. ಮುದ್ದಾಗಿ ಸಾಕಿದ್ದ ‘ಚೀಕು’ ಎಂಬ ನಾಯಿಯಿಂದಾಗಿ ವರ್ಷಗಳ ಬಳಿಕ ಇವರಿಬ್ಬರು ಮುಖಾಮುಖಿಯಾಗ್ತಾರೆ, ಜಗಳನೂ ಆಡುತ್ತಾರೆ.
ಅಭಿಮನ್ಯು ತನ್ನ ತಂಗಿಗೆ ಸರಿಯಾದ ಜೋಡಿ ಅಲ್ಲ ಎಂಬ ಕಾರಣದಿಂದ ಈ ಮದುವೆಯನ್ನು ಹೇಗಾದ್ರು ತಪ್ಪಿಸಬೇಕೆಂದು ಶ್ರಾವಣಿ ತುಂಬಾ ಪ್ರಯತ್ನಿಸುತ್ತಾಳೆ ಆದರೆ ವಿಫಲಳಾಗ್ತಾಳೆ. ಅಚಾನಕ್ ಆಗಿ ಹಳೆ ವಿಷಯಗಳು ಶ್ರಾವಣಿಯ ಅತ್ತಿಗೆ ಬಿಂದುಗೆ ತಿಳಿಯುತ್ತದೆ ಆಕೆಯು ಶ್ರಾವಣಿಯ ಜೊತೆ ಕೈಜೋಡಿಸುತ್ತಾಳೆ.
ಪರಿಸ್ಥಿತಿ ಹೀಗಿದ್ದರೂ ನಿಶಿತಾ-ಅಭಿಮನ್ಯು ಮದುವೆಯ ಘಳಿಗೆ ಸಮೀಪಿಸಿದೆ. ಈ ಮದುವೆ ನಡೆಯುತ್ತಾ? ವಿಧಿ ಇಲ್ಲದೆ ತಂಗಿಗೆ ಮದುವೆ ಮಾಡಿಸಿ ಶ್ರಾವಣಿ ವಿದೇಶಕ್ಕೆ ಹೊರಟು ಹೋಗುತ್ತಾಳ? ಅಭಿ- ಶ್ರಾವಣಿ ಒಂದಾಗುವಂತೆ ಮಾಡುತ್ತಿರುವ ಚೀಕುವಿನ ಪ್ರಯತ್ನ ಫಲಿಸುತ್ತಾ? ಅಭಿ-ಶ್ರಾವಣಿಯ ಎರಡಕ್ಷರದ ಪ್ರೀತಿಗೆ ಸಿಗುತ್ತಾ ಎರಡನೇ ಅವಕಾಶ? ಎಂಬ ಪ್ರಶ್ನೆಗಳ ಉತ್ತರಕ್ಕೆ ತಪ್ಪದೇ ವೀಕ್ಷಿಸಿ ರೋಚಕ ಸಂಚಿಕೆಗಳನ್ನೊಳಗೊಂಡ ‘ಅವನು ಮತ್ತೆ ಶ್ರಾವಣಿ’ ವಿವಾಹ ಅಧ್ಯಾಯ.. ಸೋಮ-ಶನಿವಾರ ರಾತ್ರಿ 10 ಗಂಟೆಗೆ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ.
ಸ್ಟಾರ್ ಸುವರ್ಣ - ಸುವರ್ಣ ಗೃಹಮಂತ್ರಿ ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಇದೀಗ ವೀಕ್ಷಕರಿಗೆ ಮಧ್ಯಾಹ್ನದ ಮನರಂಜನೆಯನ್ನು…
ಸ್ಟಾರ್ ಸುವರ್ಣ - ಜಾನಕಿ ಸಂಸಾರ ಕನ್ನಡ ಕಿರುತೆರೆಯ ಕಡಲಲ್ಲಿ ಸ್ಟಾರ್ ಸುವರ್ಣ ವಾಹಿನಿಯು ಹೊಸ ಯೋಜನೆಗಳ ಜೊತೆ ವಿನೂತನ…
ಈಗಾಗಲೇ ಸಾವಿರ ಸಂಚಿಕೆಗಳನ್ನು ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಸ್ಟಾರ್ ಸುವರ್ಣ ವಾಹಿನಿಯ ಅಡುಗೆ ಶೋ "ಬೊಂಬಾಟ್ ಭೋಜನ"ದಲ್ಲಿ ಈ ಬುಧವಾರ…
ಸುವರ್ಣ ತಾವ್ ಪ್ರೀಮಿಯರ್ ಚಿತ್ರ ಸಲಾರ್ ಕನ್ನಡಿಗರಿಗೆ ಸ್ಟಾರ್ ಸುವರ್ಣ ವಾಹಿನಿಯು ಅನೇಕ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು, ಧಾರಾವಾಹಿಗಳನ್ನು, ಸಿನಿಮಾಗಳನ್ನು…
ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ಜೀ಼ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ…
ಸ್ಟಾರ್ ಸುವರ್ಣದ 'ಬೊಂಬಾಟ್ ಭೋಜನ'ದಲ್ಲಿ ಅಯೋಧ್ಯೆ ರಾಮಲಲ್ಲಾ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್...ಇದೇ ಬುಧವಾರ ಮಧ್ಯಾಹ್ನ12 ಗಂಟೆಗೆ..! ಸ್ಟಾರ್…
This website uses cookies.
Read More